ಸಂಪಾಜೆ ಕಡೆಪಾಲದ ಅಲಿಗುಡ್ಡೆಯ ಅಲವಿ ಎಂಬವರ ಮಗ ಅನ್ಸಾರ್ ಎಂಬವರ ಮಡದಿ ಮೂಲತಃ ಕುಂಬ್ರದ ಯುವತಿ ಸಾವಿಗೀಡಾಗಿರುವ ಬಗ್ಗೆ ಇದೀಗ ವರದಿಯಾಗಿದೆ. ಆತ್ಮಹತ್ಯೆ ಎನ್ನಲಾಗಿದ್ದು ಉಳಿದ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ. ಕೆವಿಜಿ ಆಸ್ಪತ್ರೆಗೆ ಆಂಬುಲನ್ಸ್ ನಲ್ಲಿ ಕರೆತರಲಾಗಿದೆಯೆಂದು ತಿಳಿದು ಬಂದಿದೆ.
ಯುವತಿ ಮೂಲತಃ ಕುಂಬ್ರದವರು ಮತ್ತು ಗಂಡನ ಮನೆಯವರು ದೇವರಕೊಲ್ಲಿಯಿಂದ ಸಂಪಾಜೆಗೆ ಬಂದು ನೆಲೆಸಿದವರೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ











