ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕದ ವತಿಯಿಂದ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರಿಗೆ ಮಾಸ್ಕ್ ಮತ್ತು ಹ್ಯಾಂಡ್ ಗ್ಲೋಸ್ ನ್ನು ಆ 18 ರಂದು ಕೊಡುಗೆಯಾಗಿ ನೀಡಲಾಯಿತು.
ಸುಳ್ಯ ಘಟಕದ ಸಭಾಪತಿ ಹಾಗೂ ರಕ್ತದಾನಿ ಪಿ ಬಿ ಸುಧಾಕರ್ ರೈ ರವರು ಸಂಘದ ಅಧ್ಯಕ್ಷರಾದ ಬಿ ಎಮ್ ರಫೀಕ್ ರವರಿಗೆ ಸಾಮಗ್ರಿಗಳನ್ನು ಹಸ್ತಂತರಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ಘಟಕದ ಕಾರ್ಯದರ್ಶಿ ಹಸ್ಸೈನಾರ್ ಜಯನಗರ, ಆಂಬುಲೆನ್ಸ್ ಚಾಲಕಮಾಲಕ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಹಾಗೂ ಸದಸ್ಯರುಗಳಾದ ಸಿದ್ದೀಕ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಂಬುಲೆನ್ಸ್ ನಿಲ್ದಾಣಕ್ಕೆ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಸಿ ಕೊಡುವ ಬಗ್ಗೆ ಸಂಘದ ಪದಾಧಿಕಾರಿಗಳು ವರ್ತಕರ ಸಂಘಕ್ಕೆ ಮನವಿಯನ್ನು ನೀಡಿದರು. ಮನವಿಯನ್ನು ಸ್ವೀಕರಿಸಿದ ಪಿ ಬಿ ಸುಧಾಕರ್ ರೈ ರವರು ತಕ್ಷಣ ಸ್ಪಂದಿಸುವ ಭರವಸೆಯನ್ನು ನೀಡಿದರು.