ಮೆಡ್ ಲಾಂಡ್ ಆಸ್ಪತ್ರೆಯ ಮಾಲಕರಾದ ಅಶ್ರಫ್ ಕಮ್ಮಾಡಿ ಯವರು ಟೇಪ್ ಕತ್ತರಿಸುವ ಮೂಲಕ ಕೇಂದ್ರವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.ಸುಳ್ಯ ಎಸ್ ವೈ ಎಸ್ ಝೋನ್ ಉಪಾಧ್ಯಕ್ಷ ಸಿದ್ದೀಕ್ ಗೂನಡ್ಕಸ್ವಾಗತಿಸಿದರು. ಎಸ್ ವೈ ಎಸ್ ಸಾಂತ್ವನ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಮಾಲಿಕಿ ಅವರು ಉದ್ಘಾಟನಾ ಬಾಷಣ ನೆರವೇರಿಸಿದರು.
ಬಡರೋಗಿಗಳಿಗೆ ಅನುಕೂಲ ಆಗುವಂತೆ ವಿವಿಧ ಪರಿಕರಗಳನ್ನು ಸಂಗ್ರಹಿಸಿ ಅಗತ್ಯತೆಗನುಸಾರವಾಗಿ ನೀಡುವ ಎಸ್ ವೈ ಎಸ್ ಸಾಂತ್ವನ ಪದ್ಧತಿಯಂತೆ ಸುಳ್ಯದಲ್ಲಿ ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ನೂತನವಾಗಿ ಸಾಂತ್ವನ ಕೇಂದ್ರ ಅನ್ಸಾರ್ ಕಾಂಪ್ಲೆಕ್ಸ್ ಸುಳ್ಯ ಇಲ್ಲಿ ಈ ದಿನ ಲೋಕಾರ್ಪಣೆಗೊಂಡಿತು.

