ಪೆರಾಜೆ: ಮುನವಿರುಲ್ ಇಸ್ಲಾಂ ಜಮಾಅತ್ ಗಲ್ಫ್ ಕಮಿಟಿ ಪೆರಾಜೆಯ ವಾರ್ಷಿಕ ಮಹಾಸಭೆಯು ಮೇ ಮೂವತ್ತರಂದು ವರ್ಚುವೆಲ್ ಮೀಟಿಂಗ್ ಮೂಲಕ ಯಶಸ್ವಿಯಾಗಿ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಅಶ್ರಫ್ ಬಿಳಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಹುಝೈಫಾ ಪೆರಾಜೆ ಸ್ವಾಗತ ಕೋರಿದರು. ಶಂಸುದ್ದೀನ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಝಾಹಿರ್ ಪೆರಾಜೆ ವಾರ್ಷಿಕ ವರದಿಯನ್ನು ಮಂಡಿಸಿದರೆ, ಖಜಾಂಚಿ ನಿಝಾರ್ ಬಿಳಿಯಾರ್ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.

ಅಧ್ಯಕ್ಷ ಅಶ್ರಫ್ ಬಿಳಿಯಾರ್ ಅವರು ಅಧ್ಯಕ್ಷೀಯ ಭಾಷಣ ಮಾಡಿ ಸಂಘಟನೆಯ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು. ಬಳಿಕ ಸಂಘಟನೆಯ ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಭೆಯ ಪ್ರಮುಖ ಕಾರ್ಯಕ್ರಮವಾಗಿ ಎರಡು ಸಾವಿರದ ಇಪ್ಪತ್ತಾರು ಇಪ್ಪತ್ತೇಳನೇ ಸಾಲಿನ ನೂತನ ಸಮಿತಿಯ ರಚನೆ ನಡೆಯಿತು. ನೂತನ ಪದಾಧಿಕಾರಿಗಳಾಗಿ ಹಮೀದ್ ಎಂ.ಐ. ಅವರನ್ನು ಗೌರವಾಧ್ಯಕ್ಷರಾಗಿ, ಅಶ್ರಫ್ ಬಿಳಿಯಾರ್ ಅವರನ್ನು ಅಧ್ಯಕ್ಷರಾಗಿ, ಹಮೀದ್ ಪಿ.ಬಿ. ಹಾಗೂ ಹುಝೈಫಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಝಾಹಿರ್ ಪೆರಾಜೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಉಬೈಸ್ ಅವರನ್ನು ಜೊತೆ ಕಾರ್ಯದರ್ಶಿಯಾಗಿ ಹಾಗೂ ನಿಝಾರ್ ಬಿಳಿಯಾರ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.

ಇದೇ ವೇಳೆ ಶಂಸುದ್ದೀನ್ ಮುಸ್ಲಿಯಾರ್ ಅವರನ್ನು ಗೌರವ ಸಲಹೆಗಾರರಾಗಿ, ಶಫೀಕ್ ಹಾಗೂ ಖಾದರ್ ಮದೀನಾ ಅವರನ್ನು ವೆಬ್ ಸಂಯೋಜಕರಾಗಿ ಮತ್ತು ತಾಹಿರ್ ಅಹದ್ ಅವರನ್ನು ಮೀಡಿಯಾ ಇನ್ಚಾರ್ಜ್ ಆಗಿ ನೇಮಕಗೊಳಿಸಲಾಯಿತು.

ಸಭೆಯ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಝಾಹಿರ್ ಪೆರಾಜೆ ಧನ್ಯವಾದ ಅರ್ಪಿಸಿದರು. ನೂತನ ಸಮಿತಿಯು ಸಮಾಜ ಸೇವೆ, ಧಾರ್ಮಿಕ ಚಟುವಟಿಕೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಸಂಕಲ್ಪ ವ್ಯಕ್ತಪಡಿಸಿತು.



