ಸುಳ್ಯ ತಾಲೂಕಿನ ಅಡ್ತಲೆಯ ಗೋಪಾಲಕೃಷ್ಣ ಎಂಬವರ ತೋಟದಲ್ಲಿ ಆನೆ ಮರಿಯೊಂದರ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ತೀವ್ರ ಸ್ವರೂಪದ ಗಾಯದ ಗುರುತುಗಳು ಪತ್ತೆಯಾಗಿದ್ದು, ಹಿರಿಯ ಆನೆಯೊಂದು ಈ ಮರಿಯ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಹಿರಿಯ ಆನೆಯ ಭೀಕರ ದಾಳಿಯಿಂದ ಉಂಟಾದ ಗಾಯಗಳೇ ಆನೆ ಮರಿಯ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.


ಇನ್ನು ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ವೈದ್ಯರ ತಂಡ ಆಗಮಿಸಲಿದ್ದು, ಮೃತ ಆನೆ ಮರಿಯ ಶವಪರೀಕ್ಷೆಯನ್ನು (Post-mortem) ನಡೆಸಲಿದ್ದಾರೆ. ಶವಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಆನೆ ಮರಿಯ ನಿಖರವಾದ ಸಾವಿನ ಕಾರಣ ತಿಳಿದುಬರಲಿದೆ ಎಂದು ಮೂಲಗಳು ತಿಳಿಸಿವೆ.



